Posts

Showing posts from January, 2023

ಮನದ ಮಾತು! -ಸಿಂಚನ ಕುತ್ಯಾಳ

ಮನದ ಮಾತು ಇಷ್ಟ ಪಡುವುದೆಲ್ಲವು,ನನಗೆ ದೊರಕುತ್ತಿದ್ದರೆ ಇಂದು ನನ್ನ ಕಣ್ಣೀರು‌, ವ್ಯರ್ಥವಾಗುತ್ತಿರಲಿಲ್ಲವೇನೋ? ಕೋಪ- ದುಃಖ ಇವೆರಡರ ಮುಂದೆ ಪ್ರೀತಿ ಶೂನ್ಯವೇ? ಕಳೆದುಕೊಂಡವರಿಗೆ ತಿಳಿದಿದೆ ಹೇ ಪ್ರೀತಿ, ನೀ ಎಷ್ಟು ನಾಟಕೀಯವೆಂದು! ಇಷ್ಟಪಡುವುದೆಲ್ಲವೂ ನಮ್ಮ ಜೊತೆಗಿರುತ್ತಿದ್ದರೆ; "ಯೋಚನೆ" ಎಂಬ ಪದಕ್ಕೆ ಮಹತ್ವವೇ ಸಿಗುತ್ತಿರುತಿಲ್ಲವೇನು? ಕೈ ಬಿಟ್ಟವನನ್ನು ಮರೆತುಬಿಡು, ಕೈ ಹಿಡಿಯುವವನನ್ನು ಯೋಚಿಸದಿರು, ನೀನು ಯಾವತ್ತು ನೀನಾಗಿಯೇ ಇರು! ಹೇ ಮನುಜ, ಯಾರನ್ನೂ ನಂಬದಿರು; ನಂಬಿದವರ ಕೈ ಬಿಡದಿರು! ಮರೆಯಲು ಬಯಸುತ್ತಿರುವೆ ಆದರೂ, ಮನದಲ್ಲಿ ಕಾಡುತ್ತಿರುವೆ   - ಸಿಂಚನ ಕೆ.ಎ ನ್. ಕುತ್ಯಾಳ, ಕುಡ್ನಕಜೆ