ಮನದ ಮಾತು! -ಸಿಂಚನ ಕುತ್ಯಾಳ
ಮನದ ಮಾತು
ಇಂದು ನನ್ನ ಕಣ್ಣೀರು, ವ್ಯರ್ಥವಾಗುತ್ತಿರಲಿಲ್ಲವೇನೋ?
ಕೋಪ- ದುಃಖ
ಇವೆರಡರ ಮುಂದೆ
ಪ್ರೀತಿ ಶೂನ್ಯವೇ?
ಕಳೆದುಕೊಂಡವರಿಗೆ ತಿಳಿದಿದೆ
ಹೇ ಪ್ರೀತಿ, ನೀ ಎಷ್ಟು ನಾಟಕೀಯವೆಂದು!
ಇಷ್ಟಪಡುವುದೆಲ್ಲವೂ
ನಮ್ಮ ಜೊತೆಗಿರುತ್ತಿದ್ದರೆ;
"ಯೋಚನೆ" ಎಂಬ ಪದಕ್ಕೆ
ಮಹತ್ವವೇ ಸಿಗುತ್ತಿರುತಿಲ್ಲವೇನು?
ಕೈ ಬಿಟ್ಟವನನ್ನು ಮರೆತುಬಿಡು,
ಕೈ ಹಿಡಿಯುವವನನ್ನು ಯೋಚಿಸದಿರು,
ನೀನು ಯಾವತ್ತು ನೀನಾಗಿಯೇ ಇರು!
ಹೇ ಮನುಜ,
ಯಾರನ್ನೂ ನಂಬದಿರು;
ನಂಬಿದವರ ಕೈ ಬಿಡದಿರು!
ಮರೆಯಲು ಬಯಸುತ್ತಿರುವೆ
ಆದರೂ,
ಮನದಲ್ಲಿ ಕಾಡುತ್ತಿರುವೆ
-ಸಿಂಚನ ಕೆ.ಎನ್.
ಕುತ್ಯಾಳ, ಕುಡ್ನಕಜೆ
✍️✍️👌👌
ReplyDelete