ಮನದ ಮಾತು! -ಸಿಂಚನ ಕುತ್ಯಾಳ

ಮನದ ಮಾತು


ಇಷ್ಟ ಪಡುವುದೆಲ್ಲವು,ನನಗೆ ದೊರಕುತ್ತಿದ್ದರೆ
ಇಂದು ನನ್ನ ಕಣ್ಣೀರು‌, ವ್ಯರ್ಥವಾಗುತ್ತಿರಲಿಲ್ಲವೇನೋ?

ಕೋಪ- ದುಃಖ
ಇವೆರಡರ ಮುಂದೆ
ಪ್ರೀತಿ ಶೂನ್ಯವೇ?

ಕಳೆದುಕೊಂಡವರಿಗೆ ತಿಳಿದಿದೆ
ಹೇ ಪ್ರೀತಿ, ನೀ ಎಷ್ಟು ನಾಟಕೀಯವೆಂದು!

ಇಷ್ಟಪಡುವುದೆಲ್ಲವೂ
ನಮ್ಮ ಜೊತೆಗಿರುತ್ತಿದ್ದರೆ;
"ಯೋಚನೆ" ಎಂಬ ಪದಕ್ಕೆ
ಮಹತ್ವವೇ ಸಿಗುತ್ತಿರುತಿಲ್ಲವೇನು?


ಕೈ ಬಿಟ್ಟವನನ್ನು ಮರೆತುಬಿಡು,
ಕೈ ಹಿಡಿಯುವವನನ್ನು ಯೋಚಿಸದಿರು,
ನೀನು ಯಾವತ್ತು ನೀನಾಗಿಯೇ ಇರು!

ಹೇ ಮನುಜ,
ಯಾರನ್ನೂ ನಂಬದಿರು;
ನಂಬಿದವರ ಕೈ ಬಿಡದಿರು!



ಮರೆಯಲು ಬಯಸುತ್ತಿರುವೆ
ಆದರೂ,
ಮನದಲ್ಲಿ ಕಾಡುತ್ತಿರುವೆ  


-ಸಿಂಚನ ಕೆ.ಎನ್.
ಕುತ್ಯಾಳ, ಕುಡ್ನಕಜೆ


Comments

Post a Comment

Popular posts from this blog

ಹಲ್ಸಿನ ಹಣ್ಣ್ ದೆ ಕಾರ್ಬಾರ್ ! -ಸಿಂಚನ ಕೆ.ಎನ್, ಕುತ್ಯಾಳ

ಪ್ರೀತಿಯ ಯಾನ ಸಿಂಚನ ಕೆ.ಯನ್