Posts

ಹಲ್ಸಿನ ಹಣ್ಣ್ ದೆ ಕಾರ್ಬಾರ್ ! -ಸಿಂಚನ ಕೆ.ಎನ್, ಕುತ್ಯಾಳ

 ಹಲ್ಸಿನ ಹಣ್ಣ್ ದೆ ಕಾರ್ಬಾರ್ !        ಎಪ್ರಿಲ್ -ಮೇ ತೇಳ್ರೆ ಪಗ್ಗು -ಭೇಷಂದ ಸುರು ಆದು ಈ ಹಲ್ಸ್ನಣ್ಣ್ಗೆ ಏನೋ ಡಿಮಾಂಡ್. ಇದ್ ಬೇರೆ-ಬೇರೆ ರುಚಿಲಿ, ಬಣ್ಣಲಿ,ರೀತಿಲಿ ಕೂಡಿರ್ದು. ಹಣ್ಣ್ ನ ಬುಡಿ ಎಳ್ತ್ ಲಿ ಇರ್ಕನನೆ ಕೊಯ್ದ್ ಅದರ ಗುಜ್ಜೆನೊಟ್ಟಿಗೆ ಕಡ್ಲೆ ಬೆರ್ಕೆಲಿ ಬಾರಿ ಪೊರ್ಲುನ ಗೈಪುನು ಆದು. ಇದರೊಟ್ಟಿಗೆ ಮನೆಲಿ ಎಲ್ಲವೂ ಒಳತೆಳ್ರೆ ಕಾಯಿ ಬೆಳ್ದುಟಾ ನೋಡಿದ್ ಇದ್ದದರ್ಲಿ ದೊಡ್ಡದೊಂದರ ಕೊಯ್ದ್, ತೋಳೆ ತೆಗ್ದ್, ಬೇಸಿ ಅದ್ಕೆ ಉಪ್ಪು-ಖಾರ ಸೇರ್ಸಿದು ಲಾಯ್ಕ್ ಗುದ್ದಿದ್, ಉಂಡೆ ಕಟ್ಟಿ ಹಪ್ಪಳನು ತಟ್ಟುವೊ. ಮೂರ್ ಲಾಯ್ಕನ ಬಿಸ್ಲಿಗೆ ಹಾಕಿ ಒಣ್ಗಿ ಸಿಕ್ಕಿದಮೇಲೆ ಬಂದ್ ಮಾಡಿ ಮಳೆಗಾಲಕೆ ತೆಗ್ದ್ ಇಸುವ.ಇದರೊಟ್ಟಿಗೆ ಚಂಗುಲಿನು ಆದು.       ಇನ್ನ್ ಹಣ್ಣಾಕಂತು ಪುರ್ಸೋತೇ ಇಲ್ಲೆ ಆಗಲೆ ಸುರಾದು ದೋಸೆ, ಇಡ್ಲಿ ,ಮೂಡೆ ಹಿಟ್ಟ್. ಅದರೊಟ್ಟಿಗೆ ಹಿಂಬೊತುನ ಚಾಯಕೆ ಮುಲ್ಕ, ಉಪ್ಪುಕರಿ, ಸೋಂಟೆ ಮಾಡಿಸುವೊ. ಇನ್ನ್ ಹಣ್ಣ್ ಲಯ್ಕಿದ್ದ್ ರುಚಿ ಇದ್ದರಂತು; ಹಿಟ್ಟುನು ಲಾಯ್ಕಾದು, ತಿಂಬೊಕು ಲಾಯ್ಕ್ ಇರ್ದು. ಇನ್ನೂ ಕೆಲವುಕಡೆ ಕಾರ್ತಿಂಗಳ ಹರ್ಕೆ ಕುಟುಂಬಲಿ ಮತೆ ಮನೆಲಿ ಆಚರ್ಸಿದ ಮೇಲೆ ಮೂಡೆ ಹಿಟ್ಟ್ ತಿಂಬ ಕ್ರಮ ಉಟ್ಟು. ಇನ್ನ್ ಸೂತಕ ಬಾತ್ಂತಾದರೆ ಆ‌ ತಿಂಗಳ್ಳಿ ಮೂಡೆ ಹಿಟ್ಟುನೂ ಇರಿಕಿಲೆ. ಇನ್ನ್ ಇದರ ತೋಳೆ ಬುಡ್ಸುದು ತೇಳ್ರೆ ಒಂದು ನಮೂನೆನ ಉದಾಸಿನದ ಕೆಲ್ಸಾದರು. ಮಾಯಣ ಅಂಟಿಕಂಡ್ರಂತೂ ಅದರ ಬುಡ್ಸುವ ಭಙಗ ಯಾರಿಗೆ ಬೇಕುತೇಳಿ. ಮತೆ ಕ

ಮನದ ಮಾತು! -ಸಿಂಚನ ಕುತ್ಯಾಳ

ಮನದ ಮಾತು ಇಷ್ಟ ಪಡುವುದೆಲ್ಲವು,ನನಗೆ ದೊರಕುತ್ತಿದ್ದರೆ ಇಂದು ನನ್ನ ಕಣ್ಣೀರು‌, ವ್ಯರ್ಥವಾಗುತ್ತಿರಲಿಲ್ಲವೇನೋ? ಕೋಪ- ದುಃಖ ಇವೆರಡರ ಮುಂದೆ ಪ್ರೀತಿ ಶೂನ್ಯವೇ? ಕಳೆದುಕೊಂಡವರಿಗೆ ತಿಳಿದಿದೆ ಹೇ ಪ್ರೀತಿ, ನೀ ಎಷ್ಟು ನಾಟಕೀಯವೆಂದು! ಇಷ್ಟಪಡುವುದೆಲ್ಲವೂ ನಮ್ಮ ಜೊತೆಗಿರುತ್ತಿದ್ದರೆ; "ಯೋಚನೆ" ಎಂಬ ಪದಕ್ಕೆ ಮಹತ್ವವೇ ಸಿಗುತ್ತಿರುತಿಲ್ಲವೇನು? ಕೈ ಬಿಟ್ಟವನನ್ನು ಮರೆತುಬಿಡು, ಕೈ ಹಿಡಿಯುವವನನ್ನು ಯೋಚಿಸದಿರು, ನೀನು ಯಾವತ್ತು ನೀನಾಗಿಯೇ ಇರು! ಹೇ ಮನುಜ, ಯಾರನ್ನೂ ನಂಬದಿರು; ನಂಬಿದವರ ಕೈ ಬಿಡದಿರು! ಮರೆಯಲು ಬಯಸುತ್ತಿರುವೆ ಆದರೂ, ಮನದಲ್ಲಿ ಕಾಡುತ್ತಿರುವೆ   - ಸಿಂಚನ ಕೆ.ಎ ನ್. ಕುತ್ಯಾಳ, ಕುಡ್ನಕಜೆ

ಪ್ರೀತಿಯ ಯಾನ ಸಿಂಚನ ಕೆ.ಯನ್

ಪ್ರೀತಿಯ ಯಾನ! ಶುರುವಾಯಿತು ನಮ್ಮಿಬ್ಬರ ಪ್ರೀತಿಯ ಯಾನ ನೀನೇ ಬೇಕೆಂದು ಬಯಸುತ್ತಿದೆ ಈ ಮನ... ಮಾತಿನಿಂದ ಶುರುವಾದ ಈ ಮಿಲನ ಹಗಲಿರುಳು ನಿನ್ನದೇ ಗಮನ ನನ್ನಿಂದ ನೀ ದೂರ ಸರಿದರೆ; ಈ ಜೀವನವೇ ಶೂನ್ಯ ಕೊಂಚ ಭಯವಾಗುತ್ತಿದೆ ಈ ನರಕದ ಜೀವನ... ಬಿಕ್ಕಿ- ಬಿಕ್ಕಿ ಅತ್ತಾಗ, ನೀ ಒರೆಸಿರುವೆ ಈ ಕಣ್ಣಿರನ್ನು ನಗುತ್ತಾ ಜೀವಿಸಲು ಕಲಿಸಿಕೊಟ್ಟಿದ್ದೇ ನೀನು ಒಮ್ಮೆ ಸಕರತ್ಮಾಕವನ್ನು ಯೋಚಿಸು ಎಂದದ್ದೇ ನೀನು ಓ ಗೆಳೆಯ, ನಾ ಹೇಗೆ ಬಾಳಲಿ ನಿನ್ನ ಬಿಟ್ಟು ಇನ್ನು... ಕೈ ಬಿಟ್ಟು ದೂರ ತಳ್ಳಬೇಡ ನನ್ನನ್ನು ದೂರ ಸರಿದರೆ ಹುಚ್ಚಿಯಾಗುವೆನು ನಾನು... - ಸಿಂಚನ ಕೆ.ಎನ್ ಕುತ್ಯಾಳ, ಕುಡ್ನಕಜೆ ಮನೆ

ಅರೆಭಾಷೆ, ಕೆಡ್ಡಸದ ಗಮ್ಮತ್ತ್...!, ಸಿಂಚನ ಕೆ ಯನ್

ಕೆಡ್ಡಸದ ಗಮ್ಮತ್ತ್...!      ಪೊನ್ನಿ ತಿಂಗಳ್ಳಿ ಬರುವ ಹಬ್ಬನೇ ಈ ಕೆಡ್ಡಸ. ಇದ್ ನಿನ್ನೆ- ಮೊನ್ನೆಂದ ಸುರಾದ ಆಚರಣೆ ಅಲ್ಲಾ; ನಮ್ಮ ತಾತ ಅವರ ಮುತ್ತಾತನ ಕಾಲಂದಲೇ ಬಂದ ಆಚರಣೆ ಆಗುಟು. ಈ ಆಚರಣೆನಾ ಮೂರು ದಿನನೂ ಆಚರ್ಸುವ ಕ್ರಮ ಉಟ್ಟು. ಆದರೆ ಈಗ ಕೆಲವುಕಡೆಲಿ ಕ್ರಮನ ಆಚರ್ಸದೆ ಬೊರಿ ನೆನ್ನಕ್ಕಿನ ಮಾಡಿ ಭೂಮಿಗೆ ಎಣ್ಣೆ ಶಾಸ್ತ್ರ ಮಾಡುವೆ. ಇದ್ ಆಗದೆ ನಮ್ಮ ಆಚರೆಣೆ ಮುಂದೆನ ಕಾಲಕ್ಕೂ ಗೊತ್ತಾಗುವಾಂಗೆ ಮಾಡ್ದು ನಮ್ಮ ಕರ್ತವ್ಯ ಆಗುಟು.      ಪೊನ್ನಿ ತಿಂಗಳ 27ಕ್ಕೆ ಭೂಮಿತಾಯಿ ಋತು ಆದು. ಈ ದಿನದಂದ್ ಸುರುನ ಕೆಡ್ಡಸ ಅಂತ ಕರ್ದವೆ. ಅದರ ಮರ್ದಿನ ನಡುಕೆಡ್ಡಸ, ಅದರ ಮಾರ್ನೆದಿನ ಅಕೇರಿ ಕೆಡ್ಡಸತಾ ಕರ್ ಕಂಡ್ ಬಂದ ಆಚರಣೆ ಆಗುಟು.      27ರ ಸುರುನಾ ದಿನದಂದ್ ಮನೆಲೀ ಇದ್ದವೂ ಯಾರಾರ್ ಒಬ್ಬ ಬೊಳ್ಪ್ಪಿಗೆ ಬೇಗ ಎದ್ದ್, ತೊಳ್ಸಿಕಟ್ಟೆ ಹಕ್ಕಲೆ ಕತ್ತಿ, ಮಾಯಿಪುಸೂಡಿನ ಇಸುವ. ಇದ್ ಆಯುಧತೇಳಿ ಹಿಡ್ಕಂಬಕ್ಕೆ ಕೊಡುವ ಒಂದು ಕ್ರಮ . ಇನ್ನ್ ಮಾರ್ನೆದಿನ 28ರ ನಡುಕೆಡ್ಡಸ ದಿನದಂದ್ ಬೊಳ್ಪ್ಪಿಗೆ ಬೇಗ ಎದ್ದ್ ಮನೆ ಹೆಣ್ಮಕ್ಕ ಕಾಯಿ ಹೆರ್ದ್ ಈ ಕೆಡ್ಡಸ ಬರುವ ಮುಂದೆನೆ ಅಕ್ಕಿ ಹೊರ್ದ್ ಹೊಡಿ ಮಾಡಿದ್ ಇಸುವೊ. ಇದ್ಕೆ ಈ ಹೆರ್ದ ಕಾಯಿನ ಕಲ್ಸೊಕು ಮತೇ ಬೆಲ್ಲ ಕೆರ್ಸಿದ್ ಎಳ್ಳುನೊಟ್ಟಿಗೆ ಸೇರ್ಸಕು. ಮತೇ ಒಂದು ಕೊಡಿ ಬಾಳೆ ಎಲೆ ತಕಂಡ್ ಇದರ ಮೂಡ ದಿಕ್ಕಿಲಿ(ಪೂರ್ವ)(ತುಳಸಿ ಕಟ್ಟೆ ಎದುರು) ಬಾಳೆಹಣ್ಣ್ ನೊಟ್ಟಿಗೆ ಕಲ್ಸಿ ಇಸಿದ್ ನೆನ್ನಕ್ಕಿನ್ನ ಇಸೊಕು.    

ಅರೆಭಾಷೆ ಬರವಣಿಗೆ: ಆಟಿ ಗೌಜಿ

  ಆಟಿ ಗೌಜಿ      ನಾವು ಆಚರಿಸುವ ಹಾಂಗೆ ಎಲ್ಲಾ ತಿಂಗನು ತಿಂಗಳಾಡಿಂದ ಸುರಾಗಿ, ಸಂಕ್ರಮಣಕ್ಕೆ ಮುಗ್ದದೆ. ಕಾರ್ತಿಂಗಳಂದ ಮತ್ತೇ ಬರುವ ತಿಂಗನೇ ಆಟಿ ತಿಂಗ. ಈ ಆಟಿ ತಿಂಗಳ್ಳಿ ಸತ್ಯನಾರಾಯಣ ದೇವರ ಪೂಜೆ ಮಾಡಿರೆ ಬಾರಿ ಒಳ್ಳದ್ ಗಡ.      ಆಟಿ ತಿಂಗ ಅಂತ ಹೇಳಿರೇ , ಬಾರಿ ಜೋರುನ ಮಳೆ ಬರುವ ತಿಂಗ. ಕೆಲ್ಸ ಮಾಡಿಕೆ ಆಗದೆ, ಕೆಲ್ಸಕ್ಕೂ ಹೋಕಾಗದೆ ಕಷ್ಟಲಿ ಬೊದ್ಕುವ ತಿಂಗ ಈ ಆಟಿ ತಿಂಗ. ತಾತನವು ಬೇಸಾಯ ಮಾಡಿಕಂಡ್ ಇರ್ಕಣ ನಮ್ಮ ಊರ್ಲಿ ಅಂದರೆ ಕಾರ್ತಿಂಗಳ್ಳಿಯೇ ಬೇಸಾಯ ಮುಗಿತಿತ್ತ್ ಗಡ . ಅದರೆ ಈ ಮಡಿಕೇರಿ ಅತ್ತ ಆಟಿ ಬೇಸಾಯಲಿ ಎಲ್ಲನೂ ಬೊಳ್ಳಲಿ ಹೋತ್ ಅಂತ ಹೇಳ್ದರ ಕೇಳ್ತ ಇದ್ದಗಡ. ಇದ್ ಬಾರಿ ಕಷ್ಟದ ತಿಂಗ ಹಾಂಗಾಗಿ ಈ ಕಾಲನಾ ತುಂಬಾ ಕೆಟ್ಟ ಕಾಲ ಅಂತ ಹೇಳುವೆ ಹಿರಿಯವ್.      ಆಟಿ ತಿಂಗ ಹೇಳ್ದ ಕೂಡ್ಲೇ ನೆನ್ಪಿಗೆ ಬಾದೆ "ಆಟಿಕಳಂಜ". ಇದರೊಟ್ಟಿಗೆ ಗುಳಿಗಂಗೆ ಕೊಡುವ ಸಮ್ಮನ. ಆಟಿತಿಂಗಳಿ ಮರಕೆಸ ಎಲೆ ಪತ್ರೊಡೆ, ಕಣಿಲೆ ಗೈಪು, ಅಜಂಕ್ ಪಲ್ಯ, ಅಳುಂಬು, ಆಟಿ ಹದಿನೆಂಟರ ಆಟಿ ಪಾಯಸ, ಅಮಾವಾಸೆ ನ ಹಾಲೆಮರದ ಕಷಾಯ; ಇದೆಲ್ಲಾ ಆಟಿತಿಂಗಳ ವಿಶೇಷ ಆದರೆ ಅಟ್ಟಂದ ಇಳ್ಸಿದ ಚೆನ್ನಮಣೆ, ಕವಡೆ ಇದೆಲ್ಲಾ ಅದ್ಭುತ ಆಟಗ.      ಆಟಿಕಳಂಜ ಈಗನ ಕಾಲಲಿ ಕಮ್ಮಿ ಆಗಿರ್ದು ಆದರೆ, ಹಿಂದೆ ತಾತನವರ ಕಾಲಲಿ ಮೂರು ವರ್ಗದವು ವೇಷ ಹಾಕಿಕಂಡ್ ಬರ್ತಾ ಇದ್ದಗಡ. ಸುರುಗೆ ಬಣ್ಣರ ದೆವ್ವ, ಮಳಿಯಾರ್ ದೆವ್ವ ಮತ್ತೆ ಅಜಲ ವರ್ಗದ ಆಟಿಕಳಂಜನ ವೇಷಧರಿಸಿ ಬರ್ತ ಇದ್ದ

ಅರೆಭಾಷೆ ಕವನ, ಆಟಿ ತಿಂಗ

 ಆಟಿ ತಿಂಗ ಶುರುವಾತ್ ಆಟಿ ತಿಂಗ! ಅಟ್ಟದಿಂದ ಕೆಳಗೆ ಇಳ್ಸಿದ ಚೆನ್ನಮಣೆನ... ಅಮ್ಮನು ಮಾಡಿಕೆ ಶುರುಮಾಡ್ದ ಕಣಿಲೆ ಗೈಪುನಾ,  ಅದಕ್ಕೆ ಹಾಕುವ ಒಂದೆರಡು ಹಲಸಿನಕ್ಕಿ, ಕಡ್ಲೆ, ಪದಂಜಿನಾ ಶುರುವಾತ್ ನೋಡಿ ಇನ್ನ್, ಮರಕೆಸ ಸೊಪ್ಪುನ ಪತ್ರೊಡೆ... ಮಧ್ಯಾಹ್ನದ ಬಿಸಿ-ಬಿಸಿ ಗಂಜಿಗೆ ಅಜಂಕ್ ಪಲ್ಯನು ಆಟಿಲಿ ಮಾಡಿಕೊಡುವ ಆಟಿ ಪಾಯಸನು ಅಮಾವಾಸ್ಯೆ ದಿನ ಬೊಳ್ಪ್ಪಿಗೆ ಬೇಗ ಎಬ್ಬಿಸಿ, ಕುಡ್ಸುವ ಹಾಲೆಮರದ ಕಷಾಯನು... ಆಟಿ ಹಲ್ಸಿನ ಹಣ್ಣ್ನ ತಿಂಬಕೆ ಕೊಡುವ, ಇದರ ತಿಂದರೆ ಶೀತ, ಜ್ವರ ಬಾದ್ಲೆ ಅಂತ ಹೇಳುವ ಊರ್ನ ಜನ ಸೇರಿ ಗುಳಿಗಂಗೆ ಕೋಳಿ ತಲೆ ಕೊಯಿದ್, ಇಕ್ಕುವ ಮಧ್ಯಾಹ್ನ ಎಲ್ಲವೂ ಊಟ ಮಾಡಿ ಹಿಂಬೊತ್ತಿಗೆ ಮಾರಿ ಬುಡಿಕೆ ಹೋಗುವ... ಅಂದ್ ಮಾರಿನ ಓಡ್ಸಿಕೆ ಆಟಿ-ಕಳಂಜ ಬರ್ತ್ತಿತ್ತ್... ಈಗ ಆಟಿಲಿ ಆಟಿ-ಕಳಂಜನ ನೋಡ್ದೆ ಬಾರಿ ಅಪರೂಪ ಆಗಿ ಹೋತ್! - ಸಿಂಚನ.ಕೆ.ಎನ್ ಕುತ್ಯಾಳ, ಕುಡ್ನಕಜೆ ಮನೆ

ಅರೆಭಾಷೆ ಬರವಣಿಗೆ: ಸಿಂಚನ.ಕೆ.ಯನ್

  ಕಾರ್ತಿಂಗಳ ಹರಕೆ       ಪಗ್ಗು, ಬೇಸಗೆ, ಕಾರ್ತಿಂಗ, ಆಟಿ, ಸೋಣ, ನಿರ್ನಾಲ್, ಬೆನ್ತಿಂಗ, ಜಾರ್ಥೆ, ಪೆರಾರ್ಥೆ, ಪೊನ್ನಿ(ಪುಯಿಂತೆಲ್), ಮಾಯಿ ಹಾಗೂ ಸುಗ್ಗಿ ಇದಿಸ್ಟ್ ಹನ್ನೆರಡ್ ತಿಂಗಗ ಇದ್ದ್ ಅದರ್ಲಿ ಕಾರ್ತಿಂಗದ ಗೌಜಿನ ಹೇಳಿಕೆ ಇಚ್ಚಿಸಿನೆ.      ನಮ್ಮ ತಾತನವರ ಕಾಲಲಿ ಬೇಸಾಯ ಮಾಡಿಕಂಡ್ ಇದ್ದ ಸಮಯ ಆಗಿತ್ತ್. ಆ ಸಮಯಲಿ ಬಿಸಿಲ್, ಮಳೆತೇಳದೆ ಗದ್ದೆಲೇ ಬೇಸಾಯ ಮಾಡಿ ದುಡ್ದವ್ಕೆ ಈ ಕಾರ್ತಿಂಗ ಒಂದು ರೀತಿಲಿ ಗೌಜಿ ಇದ್ದಾಂಗೆ.      ನಾವು ಬೆಳ್ಸಿದ ಬೆಳೆಗ ಪೊರ್ಲುಲಿ ಬೆಳೆಲಿ ತಾ ಗುರು ಹಿರಿಯವ್ಕೆ ಒಂದು ಕೋಳಿ ಕೊಂದು ಗೈಪು ಮಾಡಿ ಮತ್ತೆ ಹಲಸಿನಹಣ್ಣಿನ ಮೂಡೆ ಹಿಟ್ಟ್ಲಿ ಸಮ್ಮನದ ಒಟ್ಟಿಗೆ ಪಾಷಣಮೂರ್ತಿ ದೆವ್ವಕೆ ಎಡೆ ಇಕ್ಕಿ ಸಮ್ಮನ ಮಾಡ್ದು ಈ ತಿಂಗಳ್ಳಿ ಆಗಿದ್ದದೆ.      ಮನೆ ಹೆಣ್ಣ್ ಮಕ್ಕ ಬೊಳ್ಪ್ಪಿಗೆ ಬೇಗ ಎದ್ದ್ ದ್ ಮನೆ ಎಲ್ಲ ಗುಡ್ಸಿ, ಒರ್ಸಿದ್ ಅಕ್ಕಿನ ಪದುನಿಕೆ(ನೆನೆ) ಹಾಕುವ, ಹಲ್ಸುನಹಣ್ಣ್ ನ ತಂದ್ ಅದರ ಕೊಯ್ದ್ ತೋಳೆ ಬೇರೆ ಹಲಸಿನಕ್ಕಿ ಬೇರೆ ಮಾಡುವ, ಮತೇ ಸಾಗ್ವಾನಿ ಇಲ್ಲರ್ ಉಪ್ಲಿಕೆ ಸೊಪ್ಪು ನ (ಎಲೆ)ಕೊಯ್ಕಂಡ್ ಬರುವ. ಅದರ ತಂದಮೇಲೆ ಬಟ್ಟೆಲಿ ಲಾಯಿಕ್ ಪೂಜಿದ್ ಬಲೆ ಪೂರ ತೆಗ್ದ್ ಒಂದು ಕರೆಲಿ ಇಸುವ. ಹಿಂಬೊತ್ತು ಆಕಂಡ್ ಬಾಕನ ಪದುನ್ಸಿದ (ನೆನೆ ಹಾಕಿದ)ಅಕ್ಕಿನ ಮತ್ತೆ ಬುಡ್ಸಿಸಿದ ಹಲ್ಸ್ ನಹಣ್ಣ್ ನ ಕಲ್ಲ್ ಗೆ ಹಾಕಿ ಕಡ್ದ್ ಬಂದನ ತೆಗ್ದ್ ಪೂಜಿ ಇಸಿದ ಸೊಪ್ಪುನ ಮೇಲೆ ಈ ಬಂದನ ಪೂಜಿಸಿದ್ ಎಲೆನಾ ಮದ್ಚಿಸಿದ್ ಇಡ