ಹಲ್ಸಿನ ಹಣ್ಣ್ ದೆ ಕಾರ್ಬಾರ್ ! -ಸಿಂಚನ ಕೆ.ಎನ್, ಕುತ್ಯಾಳ

 ಹಲ್ಸಿನ ಹಣ್ಣ್ ದೆ ಕಾರ್ಬಾರ್ !       


ಎಪ್ರಿಲ್ -ಮೇ ತೇಳ್ರೆ ಪಗ್ಗು -ಭೇಷಂದ ಸುರು ಆದು ಈ ಹಲ್ಸ್ನಣ್ಣ್ಗೆ ಏನೋ ಡಿಮಾಂಡ್. ಇದ್ ಬೇರೆ-ಬೇರೆ ರುಚಿಲಿ, ಬಣ್ಣಲಿ,ರೀತಿಲಿ ಕೂಡಿರ್ದು.


ಹಣ್ಣ್ ನ ಬುಡಿ ಎಳ್ತ್ ಲಿ ಇರ್ಕನನೆ ಕೊಯ್ದ್ ಅದರ ಗುಜ್ಜೆನೊಟ್ಟಿಗೆ ಕಡ್ಲೆ ಬೆರ್ಕೆಲಿ ಬಾರಿ ಪೊರ್ಲುನ ಗೈಪುನು ಆದು. ಇದರೊಟ್ಟಿಗೆ ಮನೆಲಿ ಎಲ್ಲವೂ ಒಳತೆಳ್ರೆ ಕಾಯಿ ಬೆಳ್ದುಟಾ ನೋಡಿದ್ ಇದ್ದದರ್ಲಿ ದೊಡ್ಡದೊಂದರ ಕೊಯ್ದ್, ತೋಳೆ ತೆಗ್ದ್, ಬೇಸಿ ಅದ್ಕೆ ಉಪ್ಪು-ಖಾರ ಸೇರ್ಸಿದು ಲಾಯ್ಕ್ ಗುದ್ದಿದ್, ಉಂಡೆ ಕಟ್ಟಿ ಹಪ್ಪಳನು ತಟ್ಟುವೊ. ಮೂರ್ ಲಾಯ್ಕನ ಬಿಸ್ಲಿಗೆ ಹಾಕಿ ಒಣ್ಗಿ ಸಿಕ್ಕಿದಮೇಲೆ ಬಂದ್ ಮಾಡಿ ಮಳೆಗಾಲಕೆ ತೆಗ್ದ್ ಇಸುವ.ಇದರೊಟ್ಟಿಗೆ ಚಂಗುಲಿನು ಆದು.      


ಇನ್ನ್ ಹಣ್ಣಾಕಂತು ಪುರ್ಸೋತೇ ಇಲ್ಲೆ ಆಗಲೆ ಸುರಾದು ದೋಸೆ, ಇಡ್ಲಿ ,ಮೂಡೆ ಹಿಟ್ಟ್. ಅದರೊಟ್ಟಿಗೆ ಹಿಂಬೊತುನ ಚಾಯಕೆ ಮುಲ್ಕ, ಉಪ್ಪುಕರಿ, ಸೋಂಟೆ ಮಾಡಿಸುವೊ. ಇನ್ನ್ ಹಣ್ಣ್ ಲಯ್ಕಿದ್ದ್ ರುಚಿ ಇದ್ದರಂತು; ಹಿಟ್ಟುನು ಲಾಯ್ಕಾದು, ತಿಂಬೊಕು ಲಾಯ್ಕ್ ಇರ್ದು.


ಇನ್ನೂ ಕೆಲವುಕಡೆ ಕಾರ್ತಿಂಗಳ ಹರ್ಕೆ ಕುಟುಂಬಲಿ ಮತೆ ಮನೆಲಿ ಆಚರ್ಸಿದ ಮೇಲೆ ಮೂಡೆ ಹಿಟ್ಟ್ ತಿಂಬ ಕ್ರಮ ಉಟ್ಟು. ಇನ್ನ್ ಸೂತಕ ಬಾತ್ಂತಾದರೆ ಆ‌ ತಿಂಗಳ್ಳಿ ಮೂಡೆ ಹಿಟ್ಟುನೂ ಇರಿಕಿಲೆ.


ಇನ್ನ್ ಇದರ ತೋಳೆ ಬುಡ್ಸುದು ತೇಳ್ರೆ ಒಂದು ನಮೂನೆನ ಉದಾಸಿನದ ಕೆಲ್ಸಾದರು. ಮಾಯಣ ಅಂಟಿಕಂಡ್ರಂತೂ ಅದರ ಬುಡ್ಸುವ ಭಙಗ ಯಾರಿಗೆ ಬೇಕುತೇಳಿ. ಮತೆ ಕಾಯೆಣ್ಣೆನೆ ಗತಿ. ಇದರ ನೀರ್ ಮನಿ ಕಾವಿ ನೆಲಕ್ಕೊ ಸಿಮೆಂಟ್ ನೆಲಕ್ಕೊ ಬಿದ್ದರಂತೂ ಅಲ್ಲಿ ಬೇರೆನೆ ಗುರ್ತು. ಮಾಯಣ ತೆಗ್ದ್ ಕಡ್ಡಿನ ದೂರ ಬಿಸಾಡ್ರೆ ಪುಣ್ಯ. ಅಪ್ಪಿ- ತಪ್ಪಿದ್ ಮನಿ ಕಾಲಿಗೆ ಅಂಟಿತಾ ಮತೆ ಅದ್ರ ಬುಡ್ಸಿಕೆ ಇನ್ನೊಬ್ಬ ಜನ ಬರಕಾದು.


ಇನ್ನ್ ಇದರ್ಲಿ ಬೊಳ್ಮ -ಬೊಕ್ಕೆ ತ ಎರ್ಡ್ ತರಲಿ ಉಟ್ಟು. ಈ ಬೊಕ್ಕೆ ಚೂರು ಗಟ್ಟಿಲಿ ಇದ್ದರೆ, ಬೊಳ್ಮ ಉಟ್ಟಲಾ ತಿಂಬಕನ ನುಂಗಿ, ವಾಪಸ್ ಬಂದ್,ಮತ್ತೆ ನುಂಗಿ ಪುಣ್ಯಕ್ಕೆ ದೊಂಡೆಲಿ ಸಿಕ್ಕಿ ಏನೂ ಆತ್ಲೆಲತಾ ಅನ್ಸುದು.


ಜೋರು ಮಳೆ ಬಂದರಂತೂ ಜಾಲ್ಗೆ ಬುಡಿ, ಮೊಂದ್ರಿಂದನೆ ಎದ್ರಿಕೆ ಮನ್ಸ್ ಬಾಕಿಲೆ.ಈ ಸಮಯಲಿ ಅಂತು ಏನಾರ್ ತಿನ್ನಮತೇಳಿಯೆ ಆದು. ಇನ್ನ್ ಹಿಂಬೊತ್ ಆಕನ ಅಂತೂ ಏನಾರ್ ತಿನ್ನೊಮತೇಳ್ರೆ ಈ ಹಪ್ಪಳನೆ ನೆನ್ಪಿಗೆ ಬಾದು. ಇನ್ನ್ ಇದರ ಕೆಂಡಕ್ಕೆನ, ಎಣ್ಣೆಲಿಮನಿ ಕಾಸಿರೆ ಕರುಮ್ -ಕುರುಮ್ ಆಗಿದ್ ಒಂದು ತುಂಡು ಕಾಯಿ ಹೋಳ್ ನೊಟ್ಟಿಗೆ ತಿಂದರೆ ಇನ್ನೂ ರುಚಿನೆ.


ಖಾಲಿ ಇಷ್ಟೆನಾ! ಅಲ್ಲ, ಹಲ್ಸಿನಕ್ಕಿ ಉಳ್ದಿದ್ದದೆ ನೋಡಿ ಅದರ ಕಣಿಲೆ, ಸೋಂತೆಕಾಯಿ ಬೆರ್ಕೆಲಿ ಬಾರಿ ಲಾಯ್ಕ್ನ ಗೈಪುನು ಆದು. ಬೇಸಿದ್ ಒಣ್ಗುಸಿದ ಹಲ್ಸ್ನಕ್ಕಿನುಟ್ಟು ತೇಳ್ರೆ ಮಳೆಗಾಲಿ ತಿಂಬಕೆ ಸಾಂತಾನಿನು ಆದು.


ಮತೇ ನೀರ್ ತುಂಬಿದ ಹಲ್ಸ್ನ ಹಣ್ಣ್ ಕೊಯ್ದರೆ ಅತ್ತ ರುಚಿನು ಇರಿಕಿಲೆ, ಇತ್ತ ಬಣ್ಣ ಅಂತೂ ಮುಂದೆ ಇರಿಕಿಲೆ. ಮತ್ತೆ ಹಿಟ್ಟಿಗೆ ಕಡಿಯಕನ ಬೆಲ್ಲನೇ ಹಾಕಕಾದು.


ಇನ್ನ್ ಹಲ್ಸ್ ನ ಮರದ ಸೌದೆನೂ ಉಪಯೋಗಕೆ ಬಂದದೆ. ಗಣಹೋಮ ಆಗಿರ್ದು, ಪೂಜೆ ಹೋಮ ಎಂಥದಿದ್ದರು ಇದರ್ದೇ ಕಾರ್ಬಾರ್. ಮನೆನ ದಾರಂದಕು , ಬಾಗ್ಲೀಗು,ದೇವಸ್ಥಾನಕು, ದೈವಗಳ ಚಾವಡಿಗು ಅದೇ ಆಕು.


ಕಾಯಿ ಇರ್ಲಿ ಹಣ್ಣ್ ಇರ್ಲಿ ಮರಕ್ಕೆ ಹತ್ತಿ ಕೊಯ್ಯಕನ, ಗಳೆಲಿ ಎಳಿಯಕನ, ಬರೆ ಹಕ್ಕಲೆ ನಿತ್ತುಕಂಡ್ ಕೊಯ್ಯಕನ ಜಾಗ್ರತೆ‌ ಇರ್ಲಿ. ಈ ಸಮಯಲಿ ಮರನೊ ಪಾಂಬಜಿ ಹಿಡ್ದ್ ದು ಜಾರ್ದಲಿ ಮೊನ್ಸಾದಂವ ಮುಟ್ಟಿಕಿಲೆ.


ಇನ್ನ್ ಹಲ್ಸ್ನಣ್ಣ್ ವರ್ಸಕೊಮ್ಮೆ ಆದರೂ ಎಷ್ಟೇ ತಿಂಬಕೆ ಸಿಕ್ಕಿರುನು ಅದರ ರುಚಿನಂತೂ ಮರ್ಯಕೇ ಆಕಿಲೆ. ಅಪೂರ್ಪದವರ ಬಾಯಿಲಿ ನೀರ್ನೂ ಬಾದು. ಇನ್ನ್ ಇದರ ಸ್ರಷ್ಠಿ ಕರ್ತಂಗೆ ಅಂದರೆ ಈ ಪರಿಸರಕ್ಕೆ ನಾನಂತು ಯಾಗನಿಗು ಋಣಿನೇ.         


-ಸಿಂಚನ ಕೆ.ಎನ್ 

ಕುತ್ಯಾಳ, ಕುಡ್ನಕಜೆ ಮನೆ

Comments

  1. 🙌👌👌👌 ಇದರ ಓದಿದ್ ವರ್ಷದ ಸುರುನ ಹಲ್ಸ್‌ನ ಹಣ್ಣ್ ತಿಂದಷ್ಟ್ ಖುಷಿ ಆತ್‌....

    ReplyDelete

Post a Comment

Popular posts from this blog

ಪ್ರೀತಿಯ ಯಾನ ಸಿಂಚನ ಕೆ.ಯನ್

ಮನದ ಮಾತು! -ಸಿಂಚನ ಕುತ್ಯಾಳ