Posts

ವಿಮರ್ಶೆ ಕಥಾನ - ಕವಲು

ವಿಮರ್ಶೆ ಕಥಾನ- ಕವಲು      ಮೊದಲಿಗೆ ನಾನು ಪುಸ್ತಕವನ್ನು ಆಯ್ಕೆ ಮಾಡಿಕೊಂಡ ಕಾರಣವೇ ಲೇಖಕರು, ಅವರೇ ಎಸ್.ಎಲ್.ಭೈರಪ್ಪ , ಇವರು ಬರೆಯುವ ಲೇಖನಗಳ ಶೈಲಿಯನ್ನು ಕೇಳಿದ್ದೆ; ಆದರೆ ಓದಿರಲಿಲ್ಲ. ಓದಲು ಕಾರಣವಾದದ್ದೆ ೨೦೨೩(2023)ರ ಕ್ರಿಸ್ಮಸ್ ರಜೆ. ಕೇವಲ ಲೇಖಕರ ಹೆಸರನ್ನು ನೋಡಿ ಮೊದಲ ಪುಟದಲ್ಲಿ ಏನಿರಬಹುದು ಎಂದುಕೊಂಡಾಗ "ಸರಿಯಾಗಿ ತಿಳಕ. ನಾನು ನಿನಗೆ ಕಸಿನ್ ಅಲ್ಲ. ಬ್ರದರ್. ಅಂದರೆ ಅಣ್ಣ. ನೀನು ನನಗೆ ಸಿಸ್ಟರ್. ಅಂದರೆ ತಂಗಿ'', ಈ ಸಾಲುಗಳು ನನ್ನನ್ನು ಕುತೂಹಲಕಾರಿಯ ಕಡೆಗೆ ಎಳೆಯಿತು. ಅದೇ ಪುಸ್ತಕದ ಹೆಸರು " ಕವಲು". ಕವಲು, ಅರ್ಥವೇ ಹೇಳುತ್ತದೆ ರೆಂಬೆ, ಕೊಂಬೆ. ವಿಷಯಗಳು ಸಕರಾತ್ಮಕವಾಗಿರಲಿ, ನಕರಾತ್ಮಕವಾಗಿರಲಿ ಕವಲು ಒಡೆದ ಕೂಡಲೇ ವಿಷಯ ಪಸರಿಸುತ್ತದೆ. ಪುಟ ಸಂಖ್ಯೆ ೨೪(24) ಮತ್ತು ೨೫(25)ಕ್ಕೆ ಬಂದು ನಿಂತಾಗ; ನಾನು ಆರಿಸಿರುವ ಪುಸ್ತಕ ತಪ್ಪಾಗಿದೆ; ಸಾಕು ನಿಲ್ಲಿಸುವ ಎಂದೆನಿಸಿತು. ಸ್ವಲ್ಪ ನಂತರ ಮತ್ತೊಮ್ಮೆ ಪುಸ್ತಕವನ್ನು ಕೈಗೆತ್ತಿಕೊಂಡು ಸಣ್ಣ ಮಟ್ಟಿಗೆಯ ಕಾದಂಬರಿ ಓದುಗಾರಳಾದ ನಾನು ಓದಲೇ ಬೇಕು ಎಂದೆನಿಸಿ ಶುರುಮಾಡಿದಾಗ ೩೦೦(300) ಪುಟಕ್ಕೆ ತಲುಪಿದ್ದು ಗೊತ್ತೇ ಆಗಲಿಲ್ಲ. ಓದಿದ ನಂತರ ಸಾರ್ಥಕತೆ ಎಂದೆನಿಸಿತು; ಜೊತೆಗೆ ಈ ಪುಸ್ತಕದ ಪರಿಚಯವನ್ನು ಕೆಲವರೊಂದಿಗೆ ವಿಮರ್ಶಿಸಿದುವುದರ ಜೊತೆಗೆ ಎಷ್ಟು ಪ್ರಶ್ನೆಗಳನ್ನು ಹುಟ್ಟಿಸಿವೆ; ಬದುಕು ಎಂದರೆ ಏನನ್ನೆಲಾ ಎದುರಿಸಬಹುದು ಎಂಬುದಕ್ಕೆ ಸಾಕ್ಷಿ...

ಸವಿ ನೆನಪಿನ ಪಯಣದಲ್ಲಿ; ಇದೊಂದು ಕೂಡಿಟ್ಟ ನೆನಪು!

ಸವಿ ನೆನಪಿನ ಪಯಣದಲ್ಲಿ; ಇದೊಂದು ಕೂಡಿಟ್ಟ ನೆನಪು!      ನೆನಪು ಸವಿಯಾಗಿರಲಿ ಕಹಿಯಾಗಿರಲಿ ಪಯಣದ ಪಥದಲ್ಲಿ ಮರೆಯಾಗದಂತೆ ಉಳಿಯುವಂತದ್ದು. ನನ್ನ ಜೀವನದಲ್ಲಿ ಎಷ್ಟೋ ನಡೆದು ಹೋದ ಘಟನೆಗಳಿರಬಹುದು. ಆದರೆ, ಈ ಸವಿನೆನಪು ಮರೆತರು ಮತ್ತೆ ಮತ್ತೆ ಮರುಕಳಿಸಿ, ಜೀವನದ ಖುಷಿಯ ಪಯಣದಲ್ಲಿ ನನ್ನೊಂದಿಗೆ ಸಾಗುತ್ತದೆ.      ಕನಸು ಕಂಡವರು ಯಾರಿಲ್ಲ ಹೇಳಿ, ಟೀಚರ್ ಆಗುವ ಕನಸು ಹೆಚ್ಚಿನ ಹುಡುಗಿಯರಿಗೆ ಚಿಕ್ಕ ವಯಸ್ಸಿನಲ್ಲಿಯೇ, ಅಮ್ಮನ ಚೂಡಿದಾರ್ ಶಾಲನ್ನು ಸುತ್ತಿ ತನ್ನಷ್ಟಕ್ಕೆ ಪಾಠ ಮಾಡಿ ತನ್ನದೇ ಕಲ್ಪನಾ ಲೋಕದಲ್ಲಿ ಮುಳುಗಿ ನಂತರ ಅಂಕಗಳ ಮೂಲಕ ಕನಸು ಬೇರೆ ದಾರಿಯನ್ನು ಸೇರಿದ್ದು ಇದೆ.      ಇದೆಲ್ಲ ಒಂದು ಕಡೆಯಾದರೆ, ನನ್ನ ಈ ಸವಿ ನೆನಪಿನ ಪಯಣಕ್ಕೆ ಸಾಕ್ಷಿಯಾದದ್ದು ಸರಕಾರಿ ಪದವಿಪೂರ್ವ ಕಾಲೇಜು, ಗುತ್ತಿಗಾರು. ಈ ಸ್ನಾತಕೋತರ ಅವಧಿಯಲ್ಲಿ ನಮ್ಮ ವಿದ್ಯಾ ಸಂಸ್ಥೆಯಿಂದ ಇಂಟರ್ನ್ಶಿಪ್ ಮಾಡುವ ಅವಕಾಶ ಸಿಕ್ಕಿದಾಗ ಉಪನ್ಯಾಸಕರಾಗಿ 15 ದಿನಗಳ ಸೇವೆ ಸಲ್ಲಿಸಬೇಕು ಎಂದುಕೊಂಡಿದ್ದೆ. ಇದರ ಬಗ್ಗೆ ನಾನು ನನ್ನ ಪ್ರೊಫೆಸರ್ ಬಳಿ ತರಗತಿಯ ವೇಳೆ ಎಷ್ಟೋ ಸಲ ಚರ್ಚಿಸಿದ್ದುಂಟು. ಇದರ ಜೊತೆಗೆ ಎಲ್ಲಿಯಾದರೂ ಅವಕಾಶ ಸಿಗದೇ ಇದ್ದಾಗ, ಬೇರೆ ಎಲ್ಲಿಯಾದರೂ ಕೆಲಸ ಮಾಡುವ ಎನ್ನುವ ಯೋಜನೆಯನ್ನು ಹಾಕಿಕೊಂಡಿದ್ದೆ ಕೂಡ. ಒಂದು ಆಯ್ಕೆ ಗುತ್ತಿಗಾರು ಕಾಲೇಜು ಆದರೆ, ಇನ್ನೊಂದೆಡೆ ಕುಮಾರಸ್ವಾಮಿ ವಿದ್ಯಾಸಂಸ್ಥೆ ಸುಬ...

ಹಲ್ಸಿನ ಹಣ್ಣ್ ದೆ ಕಾರ್ಬಾರ್ ! -ಸಿಂಚನ ಕೆ.ಎನ್, ಕುತ್ಯಾಳ

 ಹಲ್ಸಿನ ಹಣ್ಣ್ ದೆ ಕಾರ್ಬಾರ್ !        ಎಪ್ರಿಲ್ -ಮೇ ತೇಳ್ರೆ ಪಗ್ಗು -ಭೇಷಂದ ಸುರು ಆದು ಈ ಹಲ್ಸ್ನಣ್ಣ್ಗೆ ಏನೋ ಡಿಮಾಂಡ್. ಇದ್ ಬೇರೆ-ಬೇರೆ ರುಚಿಲಿ, ಬಣ್ಣಲಿ,ರೀತಿಲಿ ಕೂಡಿರ್ದು. ಹಣ್ಣ್ ನ ಬುಡಿ ಎಳ್ತ್ ಲಿ ಇರ್ಕನನೆ ಕೊಯ್ದ್ ಅದರ ಗುಜ್ಜೆನೊಟ್ಟಿಗೆ ಕಡ್ಲೆ ಬೆರ್ಕೆಲಿ ಬಾರಿ ಪೊರ್ಲುನ ಗೈಪುನು ಆದು. ಇದರೊಟ್ಟಿಗೆ ಮನೆಲಿ ಎಲ್ಲವೂ ಒಳತೆಳ್ರೆ ಕಾಯಿ ಬೆಳ್ದುಟಾ ನೋಡಿದ್ ಇದ್ದದರ್ಲಿ ದೊಡ್ಡದೊಂದರ ಕೊಯ್ದ್, ತೋಳೆ ತೆಗ್ದ್, ಬೇಸಿ ಅದ್ಕೆ ಉಪ್ಪು-ಖಾರ ಸೇರ್ಸಿದು ಲಾಯ್ಕ್ ಗುದ್ದಿದ್, ಉಂಡೆ ಕಟ್ಟಿ ಹಪ್ಪಳನು ತಟ್ಟುವೊ. ಮೂರ್ ಲಾಯ್ಕನ ಬಿಸ್ಲಿಗೆ ಹಾಕಿ ಒಣ್ಗಿ ಸಿಕ್ಕಿದಮೇಲೆ ಬಂದ್ ಮಾಡಿ ಮಳೆಗಾಲಕೆ ತೆಗ್ದ್ ಇಸುವ.ಇದರೊಟ್ಟಿಗೆ ಚಂಗುಲಿನು ಆದು.       ಇನ್ನ್ ಹಣ್ಣಾಕಂತು ಪುರ್ಸೋತೇ ಇಲ್ಲೆ ಆಗಲೆ ಸುರಾದು ದೋಸೆ, ಇಡ್ಲಿ ,ಮೂಡೆ ಹಿಟ್ಟ್. ಅದರೊಟ್ಟಿಗೆ ಹಿಂಬೊತುನ ಚಾಯಕೆ ಮುಲ್ಕ, ಉಪ್ಪುಕರಿ, ಸೋಂಟೆ ಮಾಡಿಸುವೊ. ಇನ್ನ್ ಹಣ್ಣ್ ಲಯ್ಕಿದ್ದ್ ರುಚಿ ಇದ್ದರಂತು; ಹಿಟ್ಟುನು ಲಾಯ್ಕಾದು, ತಿಂಬೊಕು ಲಾಯ್ಕ್ ಇರ್ದು. ಇನ್ನೂ ಕೆಲವುಕಡೆ ಕಾರ್ತಿಂಗಳ ಹರ್ಕೆ ಕುಟುಂಬಲಿ ಮತೆ ಮನೆಲಿ ಆಚರ್ಸಿದ ಮೇಲೆ ಮೂಡೆ ಹಿಟ್ಟ್ ತಿಂಬ ಕ್ರಮ ಉಟ್ಟು. ಇನ್ನ್ ಸೂತಕ ಬಾತ್ಂತಾದರೆ ಆ‌ ತಿಂಗಳ್ಳಿ ಮೂಡೆ ಹಿಟ್ಟುನೂ ಇರಿಕಿಲೆ. ಇನ್ನ್ ಇದರ ತೋಳೆ ಬುಡ್ಸುದು ತೇಳ್ರೆ ಒಂದು ನಮೂನೆನ ಉದಾಸಿನದ ಕೆಲ್ಸಾದರು. ಮಾಯಣ ಅಂಟಿಕಂಡ...

ಮನದ ಮಾತು! -ಸಿಂಚನ ಕುತ್ಯಾಳ

ಮನದ ಮಾತು ಇಷ್ಟ ಪಡುವುದೆಲ್ಲವು,ನನಗೆ ದೊರಕುತ್ತಿದ್ದರೆ ಇಂದು ನನ್ನ ಕಣ್ಣೀರು‌, ವ್ಯರ್ಥವಾಗುತ್ತಿರಲಿಲ್ಲವೇನೋ? ಕೋಪ- ದುಃಖ ಇವೆರಡರ ಮುಂದೆ ಪ್ರೀತಿ ಶೂನ್ಯವೇ? ಕಳೆದುಕೊಂಡವರಿಗೆ ತಿಳಿದಿದೆ ಹೇ ಪ್ರೀತಿ, ನೀ ಎಷ್ಟು ನಾಟಕೀಯವೆಂದು! ಇಷ್ಟಪಡುವುದೆಲ್ಲವೂ ನಮ್ಮ ಜೊತೆಗಿರುತ್ತಿದ್ದರೆ; "ಯೋಚನೆ" ಎಂಬ ಪದಕ್ಕೆ ಮಹತ್ವವೇ ಸಿಗುತ್ತಿರುತಿಲ್ಲವೇನು? ಕೈ ಬಿಟ್ಟವನನ್ನು ಮರೆತುಬಿಡು, ಕೈ ಹಿಡಿಯುವವನನ್ನು ಯೋಚಿಸದಿರು, ನೀನು ಯಾವತ್ತು ನೀನಾಗಿಯೇ ಇರು! ಹೇ ಮನುಜ, ಯಾರನ್ನೂ ನಂಬದಿರು; ನಂಬಿದವರ ಕೈ ಬಿಡದಿರು! ಮರೆಯಲು ಬಯಸುತ್ತಿರುವೆ ಆದರೂ, ಮನದಲ್ಲಿ ಕಾಡುತ್ತಿರುವೆ   - ಸಿಂಚನ ಕೆ.ಎ ನ್. ಕುತ್ಯಾಳ, ಕುಡ್ನಕಜೆ

ಪ್ರೀತಿಯ ಯಾನ ಸಿಂಚನ ಕೆ.ಯನ್

ಪ್ರೀತಿಯ ಯಾನ! ಶುರುವಾಯಿತು ನಮ್ಮಿಬ್ಬರ ಪ್ರೀತಿಯ ಯಾನ ನೀನೇ ಬೇಕೆಂದು ಬಯಸುತ್ತಿದೆ ಈ ಮನ... ಮಾತಿನಿಂದ ಶುರುವಾದ ಈ ಮಿಲನ ಹಗಲಿರುಳು ನಿನ್ನದೇ ಗಮನ ನನ್ನಿಂದ ನೀ ದೂರ ಸರಿದರೆ; ಈ ಜೀವನವೇ ಶೂನ್ಯ ಕೊಂಚ ಭಯವಾಗುತ್ತಿದೆ ಈ ನರಕದ ಜೀವನ... ಬಿಕ್ಕಿ- ಬಿಕ್ಕಿ ಅತ್ತಾಗ, ನೀ ಒರೆಸಿರುವೆ ಈ ಕಣ್ಣಿರನ್ನು ನಗುತ್ತಾ ಜೀವಿಸಲು ಕಲಿಸಿಕೊಟ್ಟಿದ್ದೇ ನೀನು ಒಮ್ಮೆ ಸಕರತ್ಮಾಕವನ್ನು ಯೋಚಿಸು ಎಂದದ್ದೇ ನೀನು ಓ ಗೆಳೆಯ, ನಾ ಹೇಗೆ ಬಾಳಲಿ ನಿನ್ನ ಬಿಟ್ಟು ಇನ್ನು... ಕೈ ಬಿಟ್ಟು ದೂರ ತಳ್ಳಬೇಡ ನನ್ನನ್ನು ದೂರ ಸರಿದರೆ ಹುಚ್ಚಿಯಾಗುವೆನು ನಾನು... - ಸಿಂಚನ ಕೆ.ಎನ್ ಕುತ್ಯಾಳ, ಕುಡ್ನಕಜೆ ಮನೆ

ಅರೆಭಾಷೆ, ಕೆಡ್ಡಸದ ಗಮ್ಮತ್ತ್...!, ಸಿಂಚನ ಕೆ ಯನ್

ಕೆಡ್ಡಸದ ಗಮ್ಮತ್ತ್...!      ಪೊನ್ನಿ ತಿಂಗಳ್ಳಿ ಬರುವ ಹಬ್ಬನೇ ಈ ಕೆಡ್ಡಸ. ಇದ್ ನಿನ್ನೆ- ಮೊನ್ನೆಂದ ಸುರಾದ ಆಚರಣೆ ಅಲ್ಲಾ; ನಮ್ಮ ತಾತ ಅವರ ಮುತ್ತಾತನ ಕಾಲಂದಲೇ ಬಂದ ಆಚರಣೆ ಆಗುಟು. ಈ ಆಚರಣೆನಾ ಮೂರು ದಿನನೂ ಆಚರ್ಸುವ ಕ್ರಮ ಉಟ್ಟು. ಆದರೆ ಈಗ ಕೆಲವುಕಡೆಲಿ ಕ್ರಮನ ಆಚರ್ಸದೆ ಬೊರಿ ನೆನ್ನಕ್ಕಿನ ಮಾಡಿ ಭೂಮಿಗೆ ಎಣ್ಣೆ ಶಾಸ್ತ್ರ ಮಾಡುವೆ. ಇದ್ ಆಗದೆ ನಮ್ಮ ಆಚರೆಣೆ ಮುಂದೆನ ಕಾಲಕ್ಕೂ ಗೊತ್ತಾಗುವಾಂಗೆ ಮಾಡ್ದು ನಮ್ಮ ಕರ್ತವ್ಯ ಆಗುಟು.      ಪೊನ್ನಿ ತಿಂಗಳ 27ಕ್ಕೆ ಭೂಮಿತಾಯಿ ಋತು ಆದು. ಈ ದಿನದಂದ್ ಸುರುನ ಕೆಡ್ಡಸ ಅಂತ ಕರ್ದವೆ. ಅದರ ಮರ್ದಿನ ನಡುಕೆಡ್ಡಸ, ಅದರ ಮಾರ್ನೆದಿನ ಅಕೇರಿ ಕೆಡ್ಡಸತಾ ಕರ್ ಕಂಡ್ ಬಂದ ಆಚರಣೆ ಆಗುಟು.      27ರ ಸುರುನಾ ದಿನದಂದ್ ಮನೆಲೀ ಇದ್ದವೂ ಯಾರಾರ್ ಒಬ್ಬ ಬೊಳ್ಪ್ಪಿಗೆ ಬೇಗ ಎದ್ದ್, ತೊಳ್ಸಿಕಟ್ಟೆ ಹಕ್ಕಲೆ ಕತ್ತಿ, ಮಾಯಿಪುಸೂಡಿನ ಇಸುವ. ಇದ್ ಆಯುಧತೇಳಿ ಹಿಡ್ಕಂಬಕ್ಕೆ ಕೊಡುವ ಒಂದು ಕ್ರಮ . ಇನ್ನ್ ಮಾರ್ನೆದಿನ 28ರ ನಡುಕೆಡ್ಡಸ ದಿನದಂದ್ ಬೊಳ್ಪ್ಪಿಗೆ ಬೇಗ ಎದ್ದ್ ಮನೆ ಹೆಣ್ಮಕ್ಕ ಕಾಯಿ ಹೆರ್ದ್ ಈ ಕೆಡ್ಡಸ ಬರುವ ಮುಂದೆನೆ ಅಕ್ಕಿ ಹೊರ್ದ್ ಹೊಡಿ ಮಾಡಿದ್ ಇಸುವೊ. ಇದ್ಕೆ ಈ ಹೆರ್ದ ಕಾಯಿನ ಕಲ್ಸೊಕು ಮತೇ ಬೆಲ್ಲ ಕೆರ್ಸಿದ್ ಎಳ್ಳುನೊಟ್ಟಿಗೆ ಸೇರ್ಸಕು. ಮತೇ ಒಂದು ಕೊಡಿ ಬಾಳೆ ಎಲೆ ತಕಂಡ್ ಇದರ ಮೂಡ ದಿಕ್ಕಿಲಿ(ಪೂರ್ವ)(ತುಳಸಿ ಕಟ್ಟೆ ಎದುರು) ಬಾಳೆಹಣ್ಣ್ ನ...

ಅರೆಭಾಷೆ ಬರವಣಿಗೆ: ಆಟಿ ಗೌಜಿ

  ಆಟಿ ಗೌಜಿ      ನಾವು ಆಚರಿಸುವ ಹಾಂಗೆ ಎಲ್ಲಾ ತಿಂಗನು ತಿಂಗಳಾಡಿಂದ ಸುರಾಗಿ, ಸಂಕ್ರಮಣಕ್ಕೆ ಮುಗ್ದದೆ. ಕಾರ್ತಿಂಗಳಂದ ಮತ್ತೇ ಬರುವ ತಿಂಗನೇ ಆಟಿ ತಿಂಗ. ಈ ಆಟಿ ತಿಂಗಳ್ಳಿ ಸತ್ಯನಾರಾಯಣ ದೇವರ ಪೂಜೆ ಮಾಡಿರೆ ಬಾರಿ ಒಳ್ಳದ್ ಗಡ.      ಆಟಿ ತಿಂಗ ಅಂತ ಹೇಳಿರೇ , ಬಾರಿ ಜೋರುನ ಮಳೆ ಬರುವ ತಿಂಗ. ಕೆಲ್ಸ ಮಾಡಿಕೆ ಆಗದೆ, ಕೆಲ್ಸಕ್ಕೂ ಹೋಕಾಗದೆ ಕಷ್ಟಲಿ ಬೊದ್ಕುವ ತಿಂಗ ಈ ಆಟಿ ತಿಂಗ. ತಾತನವು ಬೇಸಾಯ ಮಾಡಿಕಂಡ್ ಇರ್ಕಣ ನಮ್ಮ ಊರ್ಲಿ ಅಂದರೆ ಕಾರ್ತಿಂಗಳ್ಳಿಯೇ ಬೇಸಾಯ ಮುಗಿತಿತ್ತ್ ಗಡ . ಅದರೆ ಈ ಮಡಿಕೇರಿ ಅತ್ತ ಆಟಿ ಬೇಸಾಯಲಿ ಎಲ್ಲನೂ ಬೊಳ್ಳಲಿ ಹೋತ್ ಅಂತ ಹೇಳ್ದರ ಕೇಳ್ತ ಇದ್ದಗಡ. ಇದ್ ಬಾರಿ ಕಷ್ಟದ ತಿಂಗ ಹಾಂಗಾಗಿ ಈ ಕಾಲನಾ ತುಂಬಾ ಕೆಟ್ಟ ಕಾಲ ಅಂತ ಹೇಳುವೆ ಹಿರಿಯವ್.      ಆಟಿ ತಿಂಗ ಹೇಳ್ದ ಕೂಡ್ಲೇ ನೆನ್ಪಿಗೆ ಬಾದೆ "ಆಟಿಕಳಂಜ". ಇದರೊಟ್ಟಿಗೆ ಗುಳಿಗಂಗೆ ಕೊಡುವ ಸಮ್ಮನ. ಆಟಿತಿಂಗಳಿ ಮರಕೆಸ ಎಲೆ ಪತ್ರೊಡೆ, ಕಣಿಲೆ ಗೈಪು, ಅಜಂಕ್ ಪಲ್ಯ, ಅಳುಂಬು, ಆಟಿ ಹದಿನೆಂಟರ ಆಟಿ ಪಾಯಸ, ಅಮಾವಾಸೆ ನ ಹಾಲೆಮರದ ಕಷಾಯ; ಇದೆಲ್ಲಾ ಆಟಿತಿಂಗಳ ವಿಶೇಷ ಆದರೆ ಅಟ್ಟಂದ ಇಳ್ಸಿದ ಚೆನ್ನಮಣೆ, ಕವಡೆ ಇದೆಲ್ಲಾ ಅದ್ಭುತ ಆಟಗ.      ಆಟಿಕಳಂಜ ಈಗನ ಕಾಲಲಿ ಕಮ್ಮಿ ಆಗಿರ್ದು ಆದರೆ, ಹಿಂದೆ ತಾತನವರ ಕಾಲಲಿ ಮೂರು ವರ್ಗದವು ವೇಷ ಹಾಕಿಕಂಡ್ ಬರ್ತಾ ಇದ್ದಗಡ. ಸುರುಗೆ ಬಣ್ಣರ ದೆವ್ವ, ಮಳಿ...